ಬೆಳಕ ಹಾದಿ ತುಳಿಯಿರಿ

ವಿಶ್ವವು ಒಂದಾಗಲಿ… ಬಾಳಲಿ
ಏಳಿಗೆ ಕಹಳೆಯು ಮೊಳಗಲಿ ದಿಗ್ದೆಸೆಗಳಲಿ
ತಪ್ಪಾಗದೆ ಇರಲಿ ಎನ್ನುವ ಪ್ರೇಮದ ಕೂಗು,
ವ್ಯಾಪಕವಾಗಿ ತಬ್ಬುತಲಿರುವಾಗ
ಒಡೆಯುವ ಮಾತನು ಆಡದಿರಿ; ಸಣ್ಣವರಾಗದಿರಿ
ಕನ್ನಡಕ್ಕೆ ದ್ರೋಹವ ಬಗೆಯದಿರಿ
ಆದಿಕವಿ ಪಂಪನಿಗೆ ಇರಿಯದಿರಿ.

ಇಲ್ಲಿರುವವರು ಯಾರು ?
ಅಣ್ಣ, ತಮ್ಮ, ಬಂಧು ಮಿತ್ರರಲ್ಲದೆ
ಅನ್ಯರಿರುವರೇನು ?
ಒಬ್ಬೊಬ್ಬರು ಬೇರೆ ಬೇರೆಯಾಗಿ
ಕೊನೆಗೆ ಉಳಿಯುವುದೇನು ?

ಸಹನೆಯಿರಲಿ ಕೂತು, ಚರ್ಚಿಸಿ.
ಕೊಡುವ, ಪಡೆವ ಬಾಳುವ ಮಾತು, ಕೆಲಸ ಮಾಡಿರಿ.

ಒಡೆದು ಹೋಗಿ ನರಳಿ
ಬಹು ಪ್ರಯಾಸದಿಂದ ಒಂದುಗೂಡಿ
ಕೆಟ್ಟ ಮೇಲೂ ಬುದ್ದಿ ಕಲಿಯಲಿಲ್ಲವಿವರು
ಏನು ಜನ ?
ಕೊಂದರೆಮ್ಮನೆನ್ನರೆ ಆಲೂರು ವೆಂಕಟರಾಯರಾದಿ ಹಿರಿಯರು.

ಅಂದಿಗಿಂದಿಗೂ ಬೆಳಕ ದಾರಿ ತೋರಿದ ಕನ್ನಡಿಗರು ನಾವು
ನಾವೇ ಅಡ್ಡದಾರಿ ತುಳಿದರೆ
ಕಾಲದೂರದೇನು ?
ಚರಿತ್ರೆಯಲ್ಲಿ ಉಳಿವ
ಮಾತು, ಕೃತಿ, ಚಿಂತನೆ ಕಡೆ ಗಮನ ಕೊಡಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀರಿನಿಂದ ಮರಣ
Next post ಸರ್ವರೊಳಿತಿರುವ ಹಳ್ಳಿಪರ ಹೋರಾಡುವನಿವಾರ್‍ಯತೆಗೇನೆನ್ನುವುದು?

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

cheap jordans|wholesale air max|wholesale jordans|wholesale jewelry|wholesale jerseys